ನಮುಚಿ ಇವನನ್ನು ನಮಸ್ಸು ಎಂದೂ ಕರೆಯಲಾಗುತ್ತದೆ. ಇವನು ಅಸುರ ರಾಜ ಮಹಾಬಲಿಯ ಮಗ ಮತ್ತು ಹಿಂದೂ ಪುರಾಣಗಳ ಪ್ರಕಾರ ಪ್ರಹ್ಲಾದನ ಮೊಮ್ಮಗ. ಮಹಾಬಲಿಯ ನೂರು ಮಕ್ಕಳಲ್ಲಿ, ಅವನು ವಿಷ್ಣುವಿನ ಅನುಕರಣೀಯ ಭಕ್ತ ಎಂದು ಗುರುತಿಸಲ್ಪಟ್ಟಿದ್ದಾನೆ. ನಮಸ್ಸು ಉಪೇಂದ್ರ ಮತ್ತು ಅತೀಂದ್ರ ಎಂಬ ಎರಡು ಹೆಸರಿನಿಂದ ಕರೆಯಲ್ಪಡುತ್ತಿದ್ದನು. == ದಂತಕಥೆ == ನಮಸ್ಸುವಿನ ಹಿರಿಯ ಸಹೋದರ ಬಾಣಾಸುರನು, ಶಿವನ ಬಗೆಗಿನ ಅಚಲ ಭಕ್ತಿಯಿಂದ ಹೆಸರುವಾಸಿಯಾಗಿದ್ದು, ಆತನ ದಿವ್ಯ ನಿವಾಸವಾದ ಕೈಲಾಸದಲ್ಲಿ ದೈವಿಕ ಸೇವಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ವಿಷ್ಣುವಿನ ವಾಮನ ಅವತಾರದ ಸಮಯದಲ್ಲಿ, ತನ್ನ ತಂದೆಯೊಂದಿಗೆ ಪಾತಾಳಕ್ಕೆ ಹೋಗುವ ಸಮಯದಲ್ಲಿ ನಮಸ್ಸಿನ ಪಾತ್ರ ಬರುತ್ತದೆ ಎಂದು ವಿವರಿಸಲಾಗಿದೆ. ಪ್ರಹ್ಲಾದನ ವಂಶದ ಇಪ್ಪತ್ತೇಳು ತಲೆಮಾರುಗಳಿಗೆ ಚಿರಂಜೀವಿಯಾಗಿರಲು (ಅಮರ) ಅವಕಾಶ ಮಾಡಿಕೊಟ್ಟ ವರದ ಮೂಲಕ, ನಮಸ್ಸು ಮಹಾಬಲಿಯ ಜೊತೆಗೆ ಪಾತಾಳದಲ್ಲಿ ವಾಸಿಸುತ್ತಿದ್ದನೆಂದು ವಿವರಿಸಲಾಗಿದೆ. ವಿಷ್ಣುವಿನ ಆಶೀರ್ವಾದದಿಂದ ಅವನ ವಂಶಸ್ಥರು, ರಾಜ್ಯದ ಹೊರಗೆ ನೆಲೆಸಿರುವ ರಕ್ಷಕನ ದೈವಿಕ ರಕ್ಷಣೆಯಲ್ಲಿದ್ದಾರೆ ಎಂದು ನಂಬಲಾಗಿದೆ. ವಾಮನನ ವರದ ಪ್ರಕಾರ, ಮಹಾಬಲಿಯು ಪ್ರಸ್ತುತ ಕಲಿಯುಗ ಅಂತ್ಯದ ನಂತರ ಮುಂಬರುವ ಕೃತಯುಗದಲ್ಲಿ ಮುಂದಿನ ಇಂದ್ರನಾಗುತ್ತಾನೆ. ಇದು ಸುಮಾರು ೪,೨೬,೦೦೦ ವರ್ಷಗಳ ನಂತರ ಕೊನೆಗೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಆ ಭವಿಷ್ಯದ ಯುಗದಲ್ಲಿ, ರಾಜಕುಮಾರ ನಮಸ್ಸು ತನ್ನ ಪೂರ್ವಜ ಪ್ರಹ್ಲಾದನ ದೈವಿಕ ಆಶೀರ್ವಾದವನ್ನು ಪಡೆದು, ಸ್ವರ್ಗದಲ್ಲಿ ಪ್ರಮುಖ ಸ್ಥಾನವನ್ನು ಹೊಂದುತ್ತಾನೆ ಎಂದು ಭವಿಷ್ಯ ನುಡಿಯಲಾಗಿದೆ. == ಉಲ್ಲೇಖಗಳು ==